Posts

Showing posts from December, 2025

ಬದ್ರಿಯಾ ಮದ್ರಸ ಕ್ರಷ್ಣಾಪುರ ನಾಲ್ಕನೇ ಬ್ಲಾಕ್ ಮದ್ರಸ ವಿದ್ಯಾರ್ಥಿನಿಯ ವಿಶೇಷ ಸಾಧನೆ

Image
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದೇಶ ವಿದೇಶಗಳಲ್ಲಿ ಏಕ ಕಾಲದಲ್ಲಿ ನಡೆಸಿದ ಸ್ಮಾರ್ಟ್ ಸ್ಕಾಲರ್ಶಿಪ್ ಮುಖ್ಯ ಪರೀಕ್ಷೆಯಲ್ಲಿ ಸುರತ್ಕಲ್ ರೇಂಜಿನ ಕ್ರಷ್ಣಾಪುರ ನಾಲ್ಕನೇ ಬ್ಲಾಕ್ ಬದ್ರಿಯಾ ಮದ್ರಸದ 8 ನೇ ತರಗತಿಯ ವಿದ್ಯಾರ್ಥಿನಿ ಫಾತಿಮ ಹಾದಿಯಃ ರಾಜ್ಯ ಮಟ್ಟದಲ್ಲಿ ತೃತೀಯ ರ್ಯಾಂಕ್ ಪಡೆದು ಚಿನ್ನದ ನಾಣ್ಯ ತನ್ನದಾಗಿಸಿರುವಳು.  ಇವಳು ಯಾಕೂಬ್ ಹುಸೈನ್ ಹಾಗೂ ಸಕೀನ ದಂಪತಿಯ ಪುತ್ರಿಯಾಗಿದ್ದಾಳೆ.

ಮರ್ಕಝುಲ್ ಹಿದಾಯ ಸಂಸ್ಥೆ ಅಜ್ಜಿನಡ್ಕ ಮದ್ರಸ ವಿದ್ಯಾರ್ಥಿಯ ವಿಶೇಷ ಸಾಧನೆ

Image
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದೇಶ ವಿದೇಶಗಳಲ್ಲಿ ಏಕ ಕಾಲದಲ್ಲಿ ನಡೆಸಿದ ಸ್ಮಾರ್ಟ್ ಸ್ಕಾಲರ್ಶಿಪ್ ಮುಖ್ಯ ಪರೀಕ್ಷೆಯಲ್ಲಿ ಅಜ್ಜಿನಡ್ಕ ಮರ್ಕಝುಲ್ ಹಿದಾಯ ಸಂಸ್ಥೆಯ ಮದ್ರಸ 3 ನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ರಹ್ಮಾನ್ ಅನಸ್ ಹಮೀಂ ಪ್ರಥಮ ಸ್ಥಾನ ಪಡೆದು ಚಿನ್ನದ ನಾಣ್ಯ ತನ್ನದಾಗಿಸಿ ಮದ್ರಸ, ಕುಟುಂಬ, ಊರಿಗೆ ಕೀರ್ತಿಯನ್ನು ತಂದಿದ್ದಾನೆ. ಅನಸ್ ಹಮೀಂ ಉಳ್ಳಾಲದ ಮುಸ್ತಫ ಮದನಿ ಉಸ್ತಾದರ ಪೌತ್ರ ಮತ್ತು ಮುಹಮ್ಮದ್ ನವಾಝ್ ಉಳ್ಳಾಲ ರವರ ಪುತ್ರನಾಗಿದ್ದಾನೆ

ಸ್ಮಾರ್ಟ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಸತತ ಎರಡನೇ ಬಾರಿಗೆ ಉಳ್ಳಾಲ ಅಳೇಕಲ ಮದ್ರಸಕ್ಕೆ ಚಿನ್ನ

Image
ಅಳೇಕಲ ಮದ್ರಸ ವಿದ್ಯಾರ್ಥಿನಿಯ ವಿಶೇಷ ಸಾಧನೆ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದೇಶ ವಿದೇಶಗಳಲ್ಲಿ ಏಕ ಕಾಲದಲ್ಲಿ ನಡೆಸಿದ ಸ್ಮಾರ್ಟ್ ಸ್ಕಾಲರ್ಶಿಪ್ ಮುಖ್ಯ ಪರೀಕ್ಷೆಯಲ್ಲಿ ಅಳೇಕಲದ ನಜಾತುಸ್ಸಿಬಿಯಾನ್ ಹೈಯರ್ ಸೆಕೆಂಡರಿ ಮದ್ರಸದ +2 ತರಗತಿಯ ವಿದ್ಯಾರ್ಥಿನಿ ಫಾತಿಮ ಮುನೀಬಃ ಪ್ರಥಮ ಸ್ಥಾನ ಪಡೆದು ಚಿನ್ನದ ನಾಣ್ಯ ತಮ್ಮದಾಗಿಸಿ ಮದ್ರಸ, ಕುಟುಂಬ, ಊರಿಗೆ ಕೀರ್ತಿಯನ್ನು ತಂದಿದ್ದಾಳೆ. ವಿದ್ಯಾರ್ಥಿನಿಗೆ ಉಳ್ಳಾಲ ಮುಅಲ್ಲಿಮರ ಒಕ್ಕೂಟ ಎಸ್ ಜೆ ಎಂ ಉಳ್ಳಾಲ ರೇಂಜ್, ಅಳೇಕಲ ಅಧ್ಯಾಪಕರ ಒಕ್ಕೂಟ, ಎಸ್ ಬಿ ಎಸ್ ಅಳೇಕಲ ಅಭಿನಂದಿಸಿದೆ. ಫಾತಿಮ ಮುನೀಬಃ ಅಬ್ಬಾಸ್ ಮದನಿ ಅಳೇಕಲ ಹಾಗು ಫಾತಿಮ ಝೊಹರಾ ದಂಪತಿಯ ಪುತ್ರಿಯಾಗಿದ್ದಾಳೆ

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಕರ್ನಾಟಕ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ : 2026.ನಿರ್ವಹಣಾ ಸಮಿತಿ ಆಯ್ಕೆ

Image
ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಕರ್ನಾಟಕ ಇದರ ಅಧೀನದಲ್ಲಿ ನಡೆಯಲಿರುವ ಮದ್ರಸಾ ವಿದ್ಯಾರ್ಥಿಗಳ ಪ್ರತಿಭೋತ್ಸವ 2026 ಇದರ ನಿರ್ವಹಣಾ ರಾಜ್ಯ ಸಮಿತಿಯನ್ನು ಇತ್ತೀಚೆಗೆ ನಡೆದ ಎಸ್ ಜೆ ಎಂ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಚೇರ್ಮಾನಾಗಿ ಸಿರಾಜುದ್ದೀನ್ ಸಖಾಫಿ ಮಠ, ಉಪ ಚೇರ್ಮಾನಾಗಿ ಅಬ್ದುಲ್ಲ ಸಖಾಫಿ ಕೊಳಕೇರಿ, ಚೀಫ್ ಕನ್ವೀನರಾಗಿ ಅಬೂಬಕರ್ ಮುಸ್ಲಿಯರ್ ಕುಕ್ಕಾಜೆ, ಜೊತೆ ಕನ್ವೀನರಾಗಿ ಶರೀಫ್ ಸಖಾಫಿ ನೆಕ್ಕಿಲ್ ಆಯ್ಕೆಗೊಂಡರು. ಸದಸ್ಯರುಗಳಾಗಿ ಎನ್ ಎ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಪಿ ಎಂ ಮಹಮ್ಮದ್ ಮದನಿ, ರಶೀದ್ ಸಖಾಫಿ ಮಜೂರು, ಹಾಫಿಲ್ ಹನೀಫ್ ಮಿಸ್ಬಾಹಿ, ಇಬ್ರಾಹಿಂ ಸಖಾಫಿ ಪುಂಡೂರ್, ಇಸ್ಮಾಯಿಲ್ ಸಅದಿ ಉರುಮಣೆ, ಇಬ್ರಾಹಿಂ ನಈಮಿ ಇವರುಗಳನ್ನು ಆರಿಸಲಾಯಿತು. ಮದ್ರಸ, ರೇಂಜ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಲಿದೆಯೆಂದು ನಿರ್ವಹಣಾ ಸಮಿತಿ ಚೀಫ್ ಕನ್ವೀನರ್ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ತಿಳಿಸಿದರು.

ಎಸ್ ಜೆ ಎಂ ದ.ಕ ವೆಸ್ಟ್ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆ

Image
ಎಸ್ ಜೆ ಎಂ ದ.ಕ ಜಿಲ್ಲಾ ವೆಸ್ಟ್ ಕಾರ್ಯಕಾರಿಣಿ ಸಮಿತಿ ಸಭೆ ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಅಬ್ದುಲ್ ಅಝೀಝ್ ನೂರಾನಿ ಸಭೆಯನ್ನು ಉದ್ಘಾಟಿಸಿದರು.  ವೆಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಮಾತನಾಡಿ ದ.ಕ ವೆಸ್ಟ್ ಜಿಲ್ಲೆಯ ಅಧೀನ ರೇಂಜುಗಳ ಪ್ರತೀ ಮದ್ರಸಗಳಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳು ಸುಸೂತ್ರವಾಗಿ ನಡೆಸಬೇಕು ಎಂದು ತಿಳಿಸಿದರು. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.  ಸಭೆಯಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಹಬೀಬ್ ಸಖಾಫಿ ಸುರತ್ಕಲ್ ಇವರಿಗೆ ದ.ಕ ವೆಸ್ಟ್ ಜಿಲ್ಲೆಯ ವತಿಯಿಂದ ಸನ್ಮಾನ. ಇತ್ತೀಚೆಗೆ ನಡೆದ ಎಸ್ ಜೆ ಎಂ ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್ಜಾನ್ ಇದರ ಹೈ ಝೋನ್ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರ ಹೊಮ್ಮಿದ ದ.ಕ ವೆಸ್ಟ್ ಜಿಲ್ಲೆಯ ಸುರತ್ಕಲ್ ರೇಂಜಿನ ಹಬೀಬ್ ಸಖಾಫಿ ಸುರತ್ಕಲ್ ಇವರನ್ನು ಜಿಲ್ಲಾ ನಾಯಕರ ನೇತ್ರತ್ವದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಸಭೆಯ ವೀಡಿಯೋ ನೋಡಲು ನನ್ನನ್ನು ಮುಟ್ಟಿ ಸಮಸ್ತ 100 ನೇ ವಾರ್ಷಿಕ ಪ್ರಯುಕ್ತ ಜಿಲ್ಲಾ ಮುಅಲ್ಲಿಂ ಸಮ್ಮೇಳನಕ್ಕೆ ಅತೀ ಹೆಚ್ಚು ಮೊತ್ತವನ್ನು ಸಂಗ್ರಹಿಸಿ ನೀಡಿ ಸಹಕರಿಸಿದ SJM ಉಳ್ಳಾಲ ರೇಂಜ್ ಸಮಿತಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸಭೆಯಲ್ಲಿ ವೆಸ್ಟ್ ಜಿಲ್ಲಾ ನಾಯಕರು...

ಖುತಬಾ ಸಂಗಮ ಯಶಸ್ವಿಗೊಳಿಸಲು SJM ಶಿವಮೊಗ್ಗ ಜಿಲ್ಲಾ ಸಮಿತಿ ಕರೆ

Image
ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭ ಶರೀಅತ್ ಮೀರಿ ಹೋಗುತ್ತಿದ್ದು. ಅನಾಚಾರವೂ ದುಂದುವೆಚ್ಚವೂ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್ ವೈ ಎಸ್ KARNATAKA STATE ನಡೆಸುವ ಮಾದರಿ ಮದುವೆ ಎಂಬ ಶತದಿನ ಅಭಿಯಾನದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಸಮಿತಿ ಡಿಸೆಂಬರ್ 17 ಬುಧವಾರ ಸಾಗರದ ಬದ್ರಿಯಾ ಶಾದೀ ಮಹಲ್ ನಲ್ಲಿ ಖುತಬಾ ಸಂಗಮ ಹಮ್ಮಿಕೊಂಡಿದೆ. ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಅಸ್ಸಯ್ಯಿದ್ ಅಬೂಬಕರ್ ಸಿದ್ದೀಖ್ ಅಲ್ ಹಾದೀ ತಂಙಲ್ ರವರ ನೇತ್ರತ್ವದಲ್ಲಿ ಖ್ಯಾತ ವಿದ್ವಾಂಸ, ವಾಗ್ಮಿ ಚಿಂತಕ ಹಂಝ ಮಿಸ್ಬಾಹಿ ಓಟಪದವು ವಿಷಯ ಮಂಡನೆ ನಡೆಸುವರು. ಮೊಹಲ್ಲಾಗಳ ಧಾರ್ಮಿಕ ನಾಯಕತ್ವದ ಮುಂಚೂಣಿಯಲ್ಲಿರುವ ಖತೀಬರು, ಇಮಾಮರು, ಸದರ್ ಸಹಿತ ಸರ್ವ ಮುಅಲ್ಲಿಮರು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಪಡೆದು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊಂದಿರುತ್ತಾರೆ.. ಆ ಮೂಲಕ ಸಮಾಜವನ್ನು ಸರಿದಾರಿಗೆ ತರಲು ಸಾಧ್ಯವಿದೆ ಪ್ರಸ್ತುತ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ಖತೀಬರು,ಇಮಾಮರು, ಸದರ್ ಉಸ್ತಾದರುಗಳು ಮತ್ತು ಸರ್ವ ಮುಅಲ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಈ ಮೂಲಕ ವಿನಂತಿಸುತ್ತೇವೆ. ಅಬ್ದುಲ್ ಜಬ್ಬಾರ್ ಸಅದಿ (ಅಧ್ಯಕ್ಷರು) ಸಿ ಎಸ್ ಮುಹಮ್ಮದ್ ಹನೀಫ್ ಮದನಿ ಬೆಜ್ಜವಳ್ಳಿ (ಪ್ರ.ಕಾರ್ಯದರ್ಶಿ) ಸೈಫುಲ್ಲಾ ಸಖಾಫಿ ರಿಪ್ಪನ್ ಪೇಟೆ (ಕೋಶಾಧಿಕಾರಿ) ಮತ್ತು ಸರ್ವ ಸದಸ್ಯರು ...

ಖುತಬಾ ಸಂಗಮ ಯಶಸ್ವಿ ಗೊಳಿಸಲು SJM DK WEST ಜಿಲ್ಲಾ ಸಮಿತಿ ಕರೆ

Image
ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭ ಶರೀಅತ್ ಮೀರಿ ಹೋಗುತ್ತಿದ್ದು. ದುಂದುವೆಚ್ಚವೂ ಹೆಚ್ಚುತ್ತಿದೆ..ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಸ್ ವೈ ಎಸ್ KARNATAKA STATE ನಡೆಸುವ ಮಾದರಿ ಮದುವೆ ಎಂಬ ಶತದಿನ ಅಭಿಯಾನದ ಪ್ರಯುಕ್ತ D.K WEST ಜಿಲ್ಲಾ ಸಮಿತಿ 2025 ಡಿಸೆಂಬರ್ 16 ಮಂಗಳವಾರ ಪಂಪ್ವೆಲ್ DKC ಹಾಲ್ ನಲ್ಲಿ ಖತೀಬರಿಗಾಗಿ ಖುತಬಾ ಸಂಗಮ ಹಮ್ಮಿಕೊಂಡಿದೆ.. ಖ್ಯಾತ ವಿದ್ವಾಂಸ ವಾಗ್ಮಿ ಚಿಂತಕ ಇಬ್ರಾಹೀಂ ಸಖಾಫಿ ಪುಝಕ್ಕಾಟಿರಿ ವಿಷಯ ಮಂಡನೆ ನಡೆಸುವರು.. ಮೊಹಲ್ಲಾಗಳ ಧಾರ್ಮಿಕ ನಾಯಕತ್ವದ ಮುಂಚೂಣಿಯಲ್ಲಿರುವ ಖತೀಬರುಗಳು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಪಡೆದು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊಂದಿರುತ್ತಾರೆ.. ಆ ಮೂಲಕ ಸಮಾಜವನ್ನು ಸರಿದಾರಿಗೆ ತರಲು ಸಾಧ್ಯವಿದೆ ಪ್ರಸ್ತುತ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲಾ ವ್ಯಾಪ್ತಿಯ ಎಲ್ಲಾ ಖತೀಬರು,ಇಮಾಮರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಈ ಮೂಲಕ ವಿನಂತಿಸುತ್ತೇವೆ ABOOBAKKAR MUSLIYAR KUKKAJE  (ಅಧ್ಯಕ್ಷರು) MUHAMMAD SAQAFI  (ಪ್ರ.ಕಾರ್ಯದರ್ಶಿ) ASHRAF IMDADI  (ಕೋಶಾಧಿಕಾರಿ) ಮತ್ತು ಸರ್ವ ಸದಸ್ಯರು SJM D.K. WEST DISTRIC COMMITTEE

ಉಳ್ಳಾಲ ವ್ಯಾಪ್ತಿಯ ಖತೀಬರು ಮತ್ತು ಇಮಾಮರುಗಳು

ಉಳ್ಳಾಲ ಮುಕ್ಕಚೇರಿ ಶರೀಫ್ ಬಾಖವಿ  +918217480878 ಆಝಾದ್ ನಗರ  ಅಬ್ದುಲ್ ಸಮದ್ ಅಹ್ಸನಿ  +918660521910 ಸುಂದರಭಾಗ್  ಎನ್ ಡಿ ಮದನಿ +919741593253 ಮಾರ್ಗತಲೆ ಉಸ್ಮಾನ್ ಸಖಾಫಿ  +919740944719 ಮಂಚಿಲ ಅಬ್ಬಾಸ್ ಮದನಿ ಬಂಡಾಡಿ  +919164180713 ಅಳೇಕಲ  ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್  +919886744105 ಅಸಿಸ್ಟೆಂಟ್ ಖತೀಬ್ ಇರ್ಫಾನ್ ಸಅದಿ  +918747835472 ಕಲ್ಲಾಪು  ಶರೀಫ್ ಸಅದಿ  +919741628414 ಪಟ್ಲ  ಮುಹಮ್ಮದ್ ಫೈಝಿ ಮೋಙಂ  +919480047039 ದಾರಂದಬಾಗಿಲು  ಜಾಬಿರ್ ಫಾಳಿಲಿ  +917760319590 ತೋಟ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ  +918050702061 ಕೋಡಿ ಆದಂ ಫೈಝಿ  9448940127 +918971001246 ಕೋಟೆಪುರ ಇರ್ಶಾದ್ ಸಖಾಫಿ  +917892486364 ಮದನಿ ನಗರ  ಪಿ ಎಸ್ ಮುಹಮ್ಮದ್ ಕಾಮಿಲ್ ಸಖಾಫಿ  9743355038 ಪಾಂಡೇಲ್ ಪಕ್ಕಾ  ಅಬ್ದುಲ್ ಖಾದರ್ ಸಅದಿ  9148397283 ಪೇಟೆ ಅಹ್ಮದ್ ಕಬೀರ್ ಅಮ್ಜದಿ  9591967242 ಈಗ ಬದಲಿಗೆ ಇವರು ಇದ್ದಾರೆ 👉 ಸಿದ್ದೀ ಖ್ ಫಾಳಿಲಿ  +918150934836 ಮೇಲಂಗಡಿ  ಅನಸ್ ಅಝ್ಹರಿ +918891158011 ಕಡಪರ ಜಾರ ಮುಝಮ್ಮಿಲ್ ಮದನಿ +91 72597 93985 ಅಕ್ಕರೆಕೆರೆ ಉಸ್ಮಾನ್ ಸಅದಿ  +91 87223 72036 ಹಳೆಕೋಟೆ ಹಾಫಿಲ್ ಸಿ...